ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ
ಚಿ. ಉದಯಶಂಕರ್
ರಾಜನ್ ನಾಗೇಂದ್ರ

ಓಡುವ ನದಿ ಸಾಗರವ ಸೇರಲೆಬೇಕು

ನಾನು ನೀನು ಎಂದಾದರು ಸೇರಲೆ ಬೇಕು

ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು

ಹೃದಯ ಹಗುರಾಯಿತು ಬದುಕು ಜೇನಾಯಿತು

ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು || ಪ ||

ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು

ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು

ತಂಗಾಳಿ ಜೋಗುಳವ ಹಾಡಲು ಬೇಕು

ಬಂಗಾರದ ಹೂವೆ ನೀನು ನಗುತಿರಬೇಕು

ನನ್ನ ಜೊತೆಗಿರಬೇಕು || 1 ||

ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ

ಹರುಷದಲ್ಲಿ ದುಃಖದಲ್ಲಿ ನಿನ್ನ ನೆರಳಾಗಿರುವೆ

ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ

ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ

ಬಯಕೆ ಪೂರೈಸುವೆ || 1 ||

ಬಂಗಾರದ ಹೂವು

ಚಿತ್ರ ನೋಡಿ